Slide
Slide
Slide
previous arrow
next arrow

ಮುರುಡೇಶ್ವರಕ್ಕೆ ಮಂತ್ರಾಲಯ ಸುಭುದೇಂದ್ರ ತೀರ್ಥ ಸ್ವಾಮೀಜಿ ಭೇಟಿ

300x250 AD

ಭಟ್ಕಳ: ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಸೋಮವಾರ ಮುರುಡೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮುರುಡೇಶ್ವರ ಕ್ಷೇತ್ರಕ್ಕೆ ಆಗಮಿಸಿದ ಗುರುಗಳನ್ನು ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜೈರಾಮ್ ಅಡಿ, ದೇವಸ್ಥಾನದ ಟ್ರಸ್ಟಿ ಸತೀಶ್ ಶೆಟ್ಟಿ , ನೇತ್ರಾಣಿ ಸ್ಕೋಬಾ ಮಾಲೀಕರಾದ ಗಣೇಶ ಹರಿಕಾಂತ, ಗ್ರಾಮ ಪಂಚಾಯತ ಸದಸ್ಯ ಕೃಷ್ಣ ನಾಯ್ಕ ಮತ್ತಿತರರು ಶ್ರೀಗಳನ್ನು ಬರಮಾಡಿಕೊಂಡರು. ದೇವಸ್ಥಾನದ ಸಿಬ್ಬಂದಿ ಮತ್ತು ಅರ್ಚಕರು ಶ್ರೀಗಳನ್ನು ಬರಮಾಡಿಕೊಂಡರು. ಶ್ರೀ ಮುರುಡೇಶ್ವರ ದೇವರ ದರ್ಶನ ಪಡೆದ ಶ್ರೀಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮುರುಡೇಶ್ವರ ಗೋಪುರ ವೀಕ್ಷಣೆ ಮಾಡಿದ ಶ್ರೀಗಳು ಸಮುದ್ರ ತೀರಕ್ಕೆ ತೆರಳಿದರು. ಕೆಲದಿನಗಳ ಹಿಂದಷ್ಟೇ ನಿರ್ಮಿಸಿರುವ ತೇಲುವ ಸೇತುವೆ ಮೇಲೆ ನಡೆದು ಕೆಲಕಾಲ ಸಮಯ ಕಳೆದರು.

300x250 AD

ನಂತರ ಧೇನು ಆತಿಥ್ಯ ಗೋ ಶಾಲೆಗೆ ಭೇಟಿ ನೀಡಿ ಅಲ್ಲಿರುವ ಗೋವುಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಗೋ ಸಂರಕ್ಷಣೆಗಾಗಿ 50,000 ರೂ. ದೇಣಿಗೆ ನೀಡಿದರು.

Share This
300x250 AD
300x250 AD
300x250 AD
Back to top